Saturday, December 18, 2010

ಪೆನುಗೊಂಡ ಮತ್ತು ಸುತ್ತ ಮುತ್ತ...


ಡಿಸೆಂಬರ್ ೦೯ ರಿಂದ ೧೧ ರವರೆಗೆ ಹೋಗಿ ಬಂದ ಪ್ರವಾಸ:

ಪೆನುಗೊಂಡ :

 
ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಮೂಲ ಕ್ಷೇತ್ರ.
ಪಶ್ಚಿಮ ಗೋದಾವರಿ ಜಿಲ್ಲೆ.
ಇಲ್ಲಿ ಅಮ್ಮನವರ ಮೂಲ ದೇವಸ್ಥಾನ ಮತ್ತು ವಾಸವಿ ಧಾಮಗಳಿವೆ. ವಾಸವಿ ಧಾಮದಲ್ಲಿ ವಸತಿ ಮತ್ತು ಊಟದ ಸೌಕರ್ಯವಿದೆ. 






ಪೆನುಗೊಂಡ ತಲುಪಲು ಬೆಂಗಳೂರಿನಿಂದ ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನಿನಲ್ಲಿ ತಣುಕು ತಲುಪ ಬೇಕು. ತಣುಕು ನಿಲ್ದಾಣದಿಂದ ಪೆನುಗೊಂಡಕ್ಕೆ ೧೨ ಕಿಮಿ. ಆಟೋ ಮತ್ತು ಬಸ್ ಸಿಗುತ್ತವೆ.

ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನ್ ಸಂಖ್ಯೆ: ೧೭೨೦೯
ಮತ್ತೆ ಹಿಂದಿರುಗಲು ಟ್ರೈನ್ ಸಂಖ್ಯೆ: ೧೭೨೧೦
ಹೋಗಲು ಒಬ್ಬರಿಗೆ ಟ್ರೈನ್ ಚಾರ್ಜ್ ರೂ. ೩೨೦/- ಆಗಬಹುದು

___________________________________________

ಅನ್ನವರಂ : 

 
ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನ.

ಪೂರ್ವ ಗೋದಾವರಿ ಜಿಲ್ಲೆ

ಸತ್ಯನಾರಾಯಣ ಸ್ವಾಮಿ, ಅನಂತ ಲಕ್ಷ್ಮಿ ಸತ್ಯವತಿ, ಶಿವ ಗರ್ಭಗುಡಿಯಲ್ಲಿ ನೆಲೆಸಿದ್ದಾರೆ.
ಇದು ಪಂಪಾ ನದಿ ತೀರದ ಪುಟ್ಟ ಬೆಟ್ಟ, ರೈಲ್ವೇ ನಿಲ್ದಾಣದಿಂದ ೩ ಕಿಮಿ. ರಾಷ್ಟ್ರೀಯ ಹೆದ್ದಾರಿ ೫ ರಲ್ಲಿದೆ.



(ಅನ್ನವರಂ = ಕೇಳಿದ ವರ ಕೊಡುವ ದೇವರು)

ರತ್ನಗಿರಿ ರೂಪಾಯ
ರಾಮ ಸತ್ಯದೇವಾಯ |
ಮಹಾಶಕ್ತಿ ಯಂತ್ರಾಯ
ಭಕ್ತ ಕಲ್ಪವೃಕ್ಷಾಯ ||

___________________________________________

ಸಾಮರ್ಲಕೋಟ :


೯೨೨ ನೇ ಶತಮಾನದ ಚೋಲರ ಕಾಲದ ಪುರಾತನ,
ಶ್ರೀ ಚಾಳುಕ್ಯ ಕುಮಾರ ರಾಮ ಭೀಮೇಶ್ವರ ದೇವಸ್ಥಾನ,
ಇದು ೧೨ ಅಡಿ ಎತ್ತರದ ಸುಂದರ ಕಪ್ಪು ಶಿವಲಿಂಗ.

___________________________________________

ದ್ವಾರಪುಡಿ :


ಆಧುನಿಕ ಸುಂದರ ಅಮೃತ ಶಿಲೆಯ,
ಶ್ರೀ ಸೋಮೇಶ್ವರ ದೇವಸ್ಥಾನ.
ಅಯ್ಯಪ್ಪ, ವೆಂಕಟೇಶ್ವರ, ದುರ್ಗ ದೇವಸ್ಥಾನಗಳೂ ಇಲ್ಲಿವೆ.

___________________________________________

ಪಾಲಕೊಲ್ಲು :

 
ಶ್ರೀ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ.
ಇದು ತುಂಬಾ ದೇವಸ್ಥಾನಗಳಿರುವ ಸಮುಚ್ಛಯ.
ಇನ್ನೊಂದು ವಿಶೇಷವೆಂದರೆ ಇಲ್ಲಿ ಶ್ರೀ ಶನೀಶ್ವರ ಸ್ವಾಮಿಯು ಲಿಂಗಾಕಾರದಲ್ಲಿದ್ದಾರೆ.

ಪಾಲಕೊಲ್ಲುವಿನಲ್ಲಿ ಶ್ರೀ ಕುಬೇರ ದೇವಸ್ಥಾನವೂ ಇದೆ.

(ತೆಲುಗು ಚಿತ್ರನಟ ಚಿರಂಜೀವಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿದ್ದರು)

___________________________________________

ಭೀಮವರಂ :

 
ಶ್ರೀ ಉಮಾ ಸೋಮೇಶ್ವರ ದೇವಸ್ಥಾನ.
ಇಲ್ಲಿಯ ಲಿಂಗವು ಹುಣ್ಣಿಮೆಗೆ ಬೆಳ್ಳಗೆ ಮತ್ತು ಅಮಾವಾಸ್ಯೆಗೆ ನಸು ಗಪ್ಪು - ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಮುದ್ದಾದ ಜನಾರ್ಧನ ಸ್ವಾಮಿ, ಶಿರಡಿ ಸಾಯಿ ಬಾಬಾ, ಅನ್ನಪೂರ್ಣೇಶ್ವರಿ, ಸೂರ್ಯ, ಕಾಳ ಭೈರವೇಶ್ವರ  ದೇವಸ್ಥಾನಗಳೂ ಇಲ್ಲಿವೆ.
ಇದು ೩ನೇ ಶತಮಾನದ ದೇವಸ್ಥಾನ, ಈಗ ಪುನರ್ ನಿರ್ಮಾಣವಾಗಿದೆ.



ಭೀಮವರಂನಲ್ಲಿ ಮಾವೂಳಮ್ಮ ದೇವಸ್ಥಾನವೂ ಇದೆ. ಇದು ಸುಂದರ ಅಮೃತ ಶಿಲೆಯ ವಿಗ್ರಹ. ದೇವಿಯ ಕಣ್ಣುಗಳು ಅದ್ಭುತವಾಗಿವೆ.

___________________________________________

ಮಂಗಳಗಿರಿ :


ಮಹಾ ವಿಷ್ಣುವಿನ ೮ ಮಹಾ ಕ್ಷೇತ್ರಗಳಲ್ಲೊಂದು. ಗುಂಟೂರು ಜಿಲ್ಲೆ, ವಿಜಯವಾಡ ಬಸ್ ನಿಲ್ದಾಣದಿಂದ ಕೇವಲ  ೧೩ ಕಿಮಿ ದೂರದಲ್ಲಿದೆ.




ಮಂಗಳಗಿರಿಯಲ್ಲಿ ಸುಂದರವಾದ ಶ್ರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದೆ.



ಶ್ರಿ ಪಾನಕಾಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವು ಬೆಟ್ಟದ ಮೇಲಿದೆ. ಇಲ್ಲಿ ಭಕ್ತರು ಹರೆಸಿಕೊಂಡು ದೇವರಿಗೆ ಬೆಲ್ಲದ ಪಾನಕ ಕುಡಿಸಬಹುದು.

_______________________________________________

ವಿಜಯವಾಡ :

 

ಕೃಷ್ಣ ನದಿ ತೀರದ ಸುಂದರ ನಗರ. ಇಲ್ಲಿಯ ಇಂದ್ರಕೀಲಾದ್ರಿ ಬೆಟ್ಟದಲ್ಲಿ ತಾಯಿ  ಶ್ರೀ. ಕನಕ ದುರ್ಗಮ್ಮ ನೆಲೆಸಿದ್ದಾಳೆ.  ಕೃಷ್ಣ ನದಿ ನೋಡ ಬಹುದು. 



6 comments:

manjunath gangadhar said...

good effort badri..its really very useful info, and i liked the way u presented....i think we shud have a collection of all travels we do, and share them with friends.

thx

Bhavana Rao said...

I would certainly visit these temples not for the religion sake but for its architecture. :o)

Thanks for the info..
Cheers..

prabhamani nagaraja said...

ಉತ್ತಮ ಮಾರ್ಗದರ್ಶಕ ಲೇಖನ. ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

Shrinidhi Hande said...

nice photos and notes

Roopa said...

ಪೆನುಗೊಂಡ ಮತ್ತು ಸುತ್ತಲಿನ ಜಾಗದ ಕುರಿತು ಬಹಳ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ, ವಂದನೆಗಳು!

ದೀಪಸ್ಮಿತಾ said...

ಉತ್ತಮ ಪ್ರವಾಸಚಿತ್ರಗಳು. ಒಮ್ಮೆ ಇಲ್ಲೆಲ್ಲ ಹೋಗಿ ನೋಡಿ ಬರಬೇಕೆನಿಸಿದೆ